ನೀರು ಅಮೂಲ್ಯವಾದುದು ಮಿತವಾಗಿ ಬಳಸೋಣ

Sunday, May 31, 2009

ಭೂಮಿ ಬೇಸಿಗೆಯ ಬಿಸಿಲಿಗೆ ಕಾದಿದೆ. ಮಳೆಯಿಲ್ಲದೇ ಭೂಮಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ. ಭೂಮಿಗೆ ಜ್ವರ ಬರುವ ಸ್ಠಿತಿಯಲ್ಲಿದೆ! ಆದರೆ ನಾವು ಮಾತ್ರ ನೀರನ್ನು ಬೇಕಾಬಿಟ್ಟಿ ಬಳಸಿ ನೀರಿನ ಅಮೂಲ್ಯವಾದ ಪಾತ್ರವನ್ನೇ ಬರಿದು ಮಾಡುವ ಸ್ಥಿತಿಯಲ್ಲಿದ್ದೇವೆ. ಹೀಗಿದ್ದರೂ ದಿನಬೆಳಗಾದರೆ ಸಾಕು ಗ್ರಾಮಗಳಲ್ಲಿ ನಮ್ಮ ಜನರು ಕುಡಿಯಲು ನೀರಿಲ್ಲದ ಕಾರಣಕ್ಕಾಗಿ 5 ರಿಂದ 10 ಕಿ.ಮೀ. ವರೆಗೆ ಹೋಗಿ ಸೈಕಲ್.ಬಂಡಿ.ಕೊನೆಗೆ ಕಾಲುದಾರಿಯಲ್ಲಿ ನೀರನ್ನು ತರುವಂಥಹದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.ಗ್ರಾಮಗಳಲ್ಲಿ ಬಾವಿ ಹಳ್ಳ-ಕೊಳ್ಳ,ಕಾಲುವೆ ಹೊಂಡಗಳು ನೀರಿಲ್ಲದೆಯೇ ಒಣಗುತ್ತಿವೆ.ಇನ್ನೊಂದೆಡೆ ಮಳೆಯಿಲ್ಲದೆ ಗಿಡ ಮರಗಳು ಒಣಗುತ್ತಿವೆ. ಕೃಷಿ ಭೂಮಿಯಲ್ಲಿ ನೀರಿಲ್ಲದೇ ವ್ಯವಸಾಯ ಮಾಡಲು ರೈತರಿಗೆ ಅತೀ ಕಷ್ಟದಾಯಕವಾಗಿದೆ.

ಇಷ್ಟೆಲ್ಲಾ ಆದರೂ ನೀರನ್ನು ಯಾವ ರೀತಿ ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಒಂದು ಉದಾಹರಣೆ.ಗಜೇಂದ್ರಗಡ ಬೆಟ್ಟದ ಮೇಲೆ ಅನೇಕ ಸಿಹಿನೀರಿನ ಹೊಂಡಗಳಿವೆ. ಅವುಗಳಲ್ಲಿ ಅಕ್ಕ ತಂಗಿ,ಆಕಳ ಮತ್ತು ಮಂಗನ ಹೊಂಡಗಳೆಂದು ಕರೆಯುತ್ತಾರೆ. ಈ ಹೊಂಡಗಳ ನೀರನ್ನು ಇಲ್ಲಿನ ಲಂಬಾಣಿ ಜನಾಂಗದವರು ಸಾರಾಯಿ ತಯಾರಿಸಲು ಉಪಯೋಗಿಸುತ್ತಾರೆ. ಹೊಂಡದ ದಡದ ಮೇಲೆ ಹೆಂಡವನ್ನು ತಯಾರಿಸುತ್ತಿದ್ದಾರೆ.ಸಾರಾಯಿ ತಯಾರಿಸಿದ ಅಶುದ್ಧ ನೀರು ಮತ್ತು ತಯಾರಿಸಿ ಬಿಟ್ಟುಹೊದ ಬೂದಿ,ಕಟ್ಟಿಗೆ ಪುಡಿ ಕೊಳೆತ ಇನ್ನಿತರ ವಸ್ತುಗಳ ಕಾಲುವೆ ಮುಖಾಂತರ ನೇರವಾಗಿ ಹರಿದು ಹೊಂಡವನ್ನು ಸೇರುವುದರಿಂದ ನೀರು ಪಾಚಿ ಕಟ್ಟಿದಂತೆ ಹಚ್ಚ ಹಸಿರಾಗಿ ಮಾರ್ಪಾಡುತವೆ.

ಇದರಿಂದ ನೀರು ವಾಸನೆ ಬರುತ್ತಿರುತ್ತದೆ.ಆದರೆ ಮೂಕ ಪ್ರಾಣಿಗಳು ದಾಹವನ್ನು ತೀರಿಸಿಕೊಳ್ಳಲು ಸಾರಾಯಿ ತ್ಯಾಜ್ಯದಿಂದ ಅಶುದ್ಧಗೊಂಡ ನೀರನ್ನು ಕುಡಿದು ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿವೆ.ಅದೇ ಮಳೆಗಾಲದಲ್ಲಿ ಹೊಂಡಗಳು ತುಂಬಿ ಜಲಪಾತದಂತೆ ನೀರು ಬೆಟ್ಟದಿಂದ ಧುಮುಕುತ್ತಿರುವ ದೃಶ್ಯ ರಮಣೀಯ. ಹೊಂಡಗಳ ನೀರು ಮಲಿನವಾಗುವುದು ಹೀಗೇ ಮುಂದುವರೆದರೆ ಈಗ ಪ್ರಾಣಿಗಳಿಗೆ ತಗಲುವ ರೋಗಗಳು ಮುಂದೆ ಮನುಷ್ಯರಿಗೂ ತಗಲುವ ಯಾವ ಸಂದೇಹವಿಲ್ಲ.

ತಿಪ್ಪಣ್ಣ ಅವಧೂತ
ಎಂ.ಎ.ಜೆ.ಎಂ. II ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್.ಪತ್ರಿಕೋದ್ಯಮ ಮಹಾವಿದ್ಯಾಲಯ ಹುಬ್ಬಳ್ಳಿ -೨೯

ಸಮ್ಯಕ್ ದರ್ಶನ

Saturday, May 30, 2009

ವಿದ್ಯಾಭಾರತಿ ಪ್ರತಿಷ್ಠಾನದ ವತಿಯಿಂದ ’ನ್ಯೂ ಗ್ರೀನ್ ಕ್ಯಾಂಪಸ್ ಪ್ರಾರಂಭವಾಗಲಿದೆ. ೪೦ ಎಕರೆ ಪ್ರದೇಶ ಹೊಂದಿರುವ ಹಾಗೂ ಒಂದೇ ಸೂರಿನಡಿಯಲ್ಲಿ ಸಂಪೂರ್ಣ ವಸತಿ ಕ್ಯಾಂಪಸ್, ಗ್ರಂಥಾಲಯ, ಸ್ವತಂತ್ರ ಪ್ರಯೋಗಾಲದ ವ್ಯವಸ್ಥೆಯನ್ನು ಮಾಡಲಾಗಿದೆ.ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಲ್ಲಿ ವಸತಿ ಮತ್ತು ಪ್ರೊಫೆಸರ್ ಗಳಿಗೂ ಕೂಡಾ ಕ್ಯಾಂಪಸ್ ನಲ್ಲಿಯೇ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಹಸಿರಿನಿಂದ ತುಂಬಿದ ಕ್ಯಾಂಪಸ್, ಅದಲ್ಲದೇ ಸುಂದರವಾದ ಕೆರೆಯೂ ಇದೆ. ವಿದ್ಯಾರ್ಥಿಗಳು ನಿಸರ್ಗದ ಸೌಂದರ್ಯವನ್ನು ಸವಿಯಬಹುದು.ಹುಬ್ಬಳ್ಳಿಯ ವರೂರಿನ ಹತ್ತಿರ ನ್ಯೂ ಗ್ರೀನ್ ಕ್ಯಾಂಪಸ್ ಪ್ರಾರಂಭವಾಗಲಿದೆ.



೨೦೧೫ ರಲ್ಲಿ ಪ್ರಾರಂಭವಾಗಲಿರುವ ಈ ಕ್ಯಾಂಪಸ್ ನಲ್ಲಿ ಪೊಲಿಟೆಕ್ನಿಕ್, ಪತ್ರಿಕೋದ್ಯಮ, ಇಂಜನಿಯರಿಂಗ್, ಫಾರ್ಮಸಿ ಕೋರ್ಸ್ ಗಳು ಪ್ರಾರಂಭವಾಗಲಿದೆ.೨೦೧೫ ಅಕ್ತೋಬರ್ ದಂದು ಪೊಲಿಟೆಕ್ನಿಕ್ ಕೋರ್ಸ್ ಮೊದಲು ಪ್ರಾರಂಭವಾಗಲಿದ್ದು ನಂತರ ಉಳಿದ ಕೋರ್ಸ್ ಗಳು ಪ್ರಾರಂಭವಾಗಲಿವೆ.ವಿದ್ಯಾಭಾರತಿ ಪ್ರತಿಷ್ತಾನದ ವ್ಯವಸ್ಥಾಪಕ ನಿರ್ದೇಶಕರಾದ ವಿನಯಚಂದ್ರ ಮಹೀದ್ರಕರ್ ಅವರು ವಿದ್ಯಾರ್ಥಿಗಳ ಸಮಯದ ಸದುಪಯೋಗವನ್ನು ಪಡೆದುಕೊಳ್ಳಬೇಕೆನ್ನುವ ದೃಷ್ಟಿಯಿಂದ ಒಂದೇ ಸೂರಿನಡಿಯಲ್ಲಿ ವಸತಿ ಶಿಕ್ಶಣವನ್ನು ಪ್ರಾರಂಭಿಸಲಾಗುತ್ತಿದೆ.ವಸತಿ ಶಿಕ್ಶಣ ಇರುವದರಿಂದ ಪ್ರೊಫೆಸರ್ ಗಳು ವಿದ್ಯಾರ್ಥಿಗಳಿಗೆ ರಾತ್ರಿ ಸಮಯದಲ್ಲೂ ಕೂಡ ಪಾಠ ಹೇಳಬಹುದು ಮತ್ತು ವಿದ್ಯಾರ್ಥಿಗಳಿಗೆ ವಿಷಯದ ಬಗ್ಗೆ ಏನಾದರೂ ಸಮಸ್ಯೆ ಬಂದರೆ ಕೂಡಲೇ ಪರಿಹರಿಸಕೊಳ್ಳಬಹುದು.

ಕೋಮಲ ಮೋಟಗಿ
ಪಿ.ಜಿ.ಡಿಜೆ.
ಎಂ. ೨ ಸೆಮ್ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ.