ಸಮ್ಯಕ್ ದರ್ಶನ

Saturday, May 30, 2009

ವಿದ್ಯಾಭಾರತಿ ಪ್ರತಿಷ್ಠಾನದ ವತಿಯಿಂದ ’ನ್ಯೂ ಗ್ರೀನ್ ಕ್ಯಾಂಪಸ್ ಪ್ರಾರಂಭವಾಗಲಿದೆ. ೪೦ ಎಕರೆ ಪ್ರದೇಶ ಹೊಂದಿರುವ ಹಾಗೂ ಒಂದೇ ಸೂರಿನಡಿಯಲ್ಲಿ ಸಂಪೂರ್ಣ ವಸತಿ ಕ್ಯಾಂಪಸ್, ಗ್ರಂಥಾಲಯ, ಸ್ವತಂತ್ರ ಪ್ರಯೋಗಾಲದ ವ್ಯವಸ್ಥೆಯನ್ನು ಮಾಡಲಾಗಿದೆ.ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಲ್ಲಿ ವಸತಿ ಮತ್ತು ಪ್ರೊಫೆಸರ್ ಗಳಿಗೂ ಕೂಡಾ ಕ್ಯಾಂಪಸ್ ನಲ್ಲಿಯೇ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಹಸಿರಿನಿಂದ ತುಂಬಿದ ಕ್ಯಾಂಪಸ್, ಅದಲ್ಲದೇ ಸುಂದರವಾದ ಕೆರೆಯೂ ಇದೆ. ವಿದ್ಯಾರ್ಥಿಗಳು ನಿಸರ್ಗದ ಸೌಂದರ್ಯವನ್ನು ಸವಿಯಬಹುದು.ಹುಬ್ಬಳ್ಳಿಯ ವರೂರಿನ ಹತ್ತಿರ ನ್ಯೂ ಗ್ರೀನ್ ಕ್ಯಾಂಪಸ್ ಪ್ರಾರಂಭವಾಗಲಿದೆ.



೨೦೧೫ ರಲ್ಲಿ ಪ್ರಾರಂಭವಾಗಲಿರುವ ಈ ಕ್ಯಾಂಪಸ್ ನಲ್ಲಿ ಪೊಲಿಟೆಕ್ನಿಕ್, ಪತ್ರಿಕೋದ್ಯಮ, ಇಂಜನಿಯರಿಂಗ್, ಫಾರ್ಮಸಿ ಕೋರ್ಸ್ ಗಳು ಪ್ರಾರಂಭವಾಗಲಿದೆ.೨೦೧೫ ಅಕ್ತೋಬರ್ ದಂದು ಪೊಲಿಟೆಕ್ನಿಕ್ ಕೋರ್ಸ್ ಮೊದಲು ಪ್ರಾರಂಭವಾಗಲಿದ್ದು ನಂತರ ಉಳಿದ ಕೋರ್ಸ್ ಗಳು ಪ್ರಾರಂಭವಾಗಲಿವೆ.ವಿದ್ಯಾಭಾರತಿ ಪ್ರತಿಷ್ತಾನದ ವ್ಯವಸ್ಥಾಪಕ ನಿರ್ದೇಶಕರಾದ ವಿನಯಚಂದ್ರ ಮಹೀದ್ರಕರ್ ಅವರು ವಿದ್ಯಾರ್ಥಿಗಳ ಸಮಯದ ಸದುಪಯೋಗವನ್ನು ಪಡೆದುಕೊಳ್ಳಬೇಕೆನ್ನುವ ದೃಷ್ಟಿಯಿಂದ ಒಂದೇ ಸೂರಿನಡಿಯಲ್ಲಿ ವಸತಿ ಶಿಕ್ಶಣವನ್ನು ಪ್ರಾರಂಭಿಸಲಾಗುತ್ತಿದೆ.ವಸತಿ ಶಿಕ್ಶಣ ಇರುವದರಿಂದ ಪ್ರೊಫೆಸರ್ ಗಳು ವಿದ್ಯಾರ್ಥಿಗಳಿಗೆ ರಾತ್ರಿ ಸಮಯದಲ್ಲೂ ಕೂಡ ಪಾಠ ಹೇಳಬಹುದು ಮತ್ತು ವಿದ್ಯಾರ್ಥಿಗಳಿಗೆ ವಿಷಯದ ಬಗ್ಗೆ ಏನಾದರೂ ಸಮಸ್ಯೆ ಬಂದರೆ ಕೂಡಲೇ ಪರಿಹರಿಸಕೊಳ್ಳಬಹುದು.

ಕೋಮಲ ಮೋಟಗಿ
ಪಿ.ಜಿ.ಡಿಜೆ.
ಎಂ. ೨ ಸೆಮ್ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ.

0 comments:

Post a Comment