ನೀರು ಅಮೂಲ್ಯವಾದುದು ಮಿತವಾಗಿ ಬಳಸೋಣ
ಸಮ್ಯಕ್ ದರ್ಶನ
Saturday, May 30, 2009
ವಿದ್ಯಾಭಾರತಿ ಪ್ರತಿಷ್ಠಾನದ ವತಿಯಿಂದ ’ನ್ಯೂ ಗ್ರೀನ್ ಕ್ಯಾಂಪಸ್ ಪ್ರಾರಂಭವಾಗಲಿದೆ. ೪೦ ಎಕರೆ ಪ್ರದೇಶ ಹೊಂದಿರುವ ಹಾಗೂ ಒಂದೇ ಸೂರಿನಡಿಯಲ್ಲಿ ಸಂಪೂರ್ಣ ವಸತಿ ಕ್ಯಾಂಪಸ್, ಗ್ರಂಥಾಲಯ, ಸ್ವತಂತ್ರ ಪ್ರಯೋಗಾಲದ ವ್ಯವಸ್ಥೆಯನ್ನು ಮಾಡಲಾಗಿದೆ.ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಲ್ಲಿ ವಸತಿ ಮತ್ತು ಪ್ರೊಫೆಸರ್ ಗಳಿಗೂ ಕೂಡಾ ಕ್ಯಾಂಪಸ್ ನಲ್ಲಿಯೇ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಹಸಿರಿನಿಂದ ತುಂಬಿದ ಕ್ಯಾಂಪಸ್, ಅದಲ್ಲದೇ ಸುಂದರವಾದ ಕೆರೆಯೂ ಇದೆ. ವಿದ್ಯಾರ್ಥಿಗಳು ನಿಸರ್ಗದ ಸೌಂದರ್ಯವನ್ನು ಸವಿಯಬಹುದು.ಹುಬ್ಬಳ್ಳಿಯ ವರೂರಿನ ಹತ್ತಿರ ನ್ಯೂ ಗ್ರೀನ್ ಕ್ಯಾಂಪಸ್ ಪ್ರಾರಂಭವಾಗಲಿದೆ.
೨೦೧೫ ರಲ್ಲಿ ಪ್ರಾರಂಭವಾಗಲಿರುವ ಈ ಕ್ಯಾಂಪಸ್ ನಲ್ಲಿ ಪೊಲಿಟೆಕ್ನಿಕ್, ಪತ್ರಿಕೋದ್ಯಮ, ಇಂಜನಿಯರಿಂಗ್, ಫಾರ್ಮಸಿ ಕೋರ್ಸ್ ಗಳು ಪ್ರಾರಂಭವಾಗಲಿದೆ.೨೦೧೫ ಅಕ್ತೋಬರ್ ದಂದು ಪೊಲಿಟೆಕ್ನಿಕ್ ಕೋರ್ಸ್ ಮೊದಲು ಪ್ರಾರಂಭವಾಗಲಿದ್ದು ನಂತರ ಉಳಿದ ಕೋರ್ಸ್ ಗಳು ಪ್ರಾರಂಭವಾಗಲಿವೆ.ವಿದ್ಯಾಭಾರತಿ ಪ್ರತಿಷ್ತಾನದ ವ್ಯವಸ್ಥಾಪಕ ನಿರ್ದೇಶಕರಾದ ವಿನಯಚಂದ್ರ ಮಹೀದ್ರಕರ್ ಅವರು ವಿದ್ಯಾರ್ಥಿಗಳ ಸಮಯದ ಸದುಪಯೋಗವನ್ನು ಪಡೆದುಕೊಳ್ಳಬೇಕೆನ್ನುವ ದೃಷ್ಟಿಯಿಂದ ಒಂದೇ ಸೂರಿನಡಿಯಲ್ಲಿ ವಸತಿ ಶಿಕ್ಶಣವನ್ನು ಪ್ರಾರಂಭಿಸಲಾಗುತ್ತಿದೆ.ವಸತಿ ಶಿಕ್ಶಣ ಇರುವದರಿಂದ ಪ್ರೊಫೆಸರ್ ಗಳು ವಿದ್ಯಾರ್ಥಿಗಳಿಗೆ ರಾತ್ರಿ ಸಮಯದಲ್ಲೂ ಕೂಡ ಪಾಠ ಹೇಳಬಹುದು ಮತ್ತು ವಿದ್ಯಾರ್ಥಿಗಳಿಗೆ ವಿಷಯದ ಬಗ್ಗೆ ಏನಾದರೂ ಸಮಸ್ಯೆ ಬಂದರೆ ಕೂಡಲೇ ಪರಿಹರಿಸಕೊಳ್ಳಬಹುದು.
ಬೀರವಳ್ಳಿಯ ಕೆಂಡದೋಕುಳಿಯ ವೈಶಿಷ್ಟ್ಯ
Monday, March 30, 2009


ಪಿ.ಜಿ.ಡಿಜೆ.ಎಂ. ೨ ಸೆಮ್ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ.
ಬದುಕಿಗೆ ಗೌರವದ ಭಾಷ್ಯ ಬರೆದ ಸೋಮು
Thursday, March 26, 2009
ಗೋಧೂಳಿಯ ಹೊತ್ತಿಗೆ ಎಲ್ಲ ಶಾಲೆ, ಕಾಲೇಜುಗಳು, ಕಚೇರಿಗಳು ತಮ್ಮ ದೈನಂದಿನ ಕೆಲಸವನ್ನು ಮುಗಿಸುತ್ತವೆ. ಆದರೆ ಆ ಹೊತ್ತಿಗೆ ತಮ್ಮ ಕೆಲಸ ಶುರು ಎಂದು ಭರದಿಂದ ನಮ್ಮನ್ನು ಕೈಬೀಸಿ ಕರೆಯುತ್ತಾರೆ ನಾನಾ ತಿನಿಸುಗಳ ತಳ್ಳು ಗಾಡಿಗಳ ಮಾಲೀಕರು. ಸೀಮೆ ಎಣ್ಣೆ ಅಥವಾ ಗ್ಯಾಸ್ ನಿಂದ ಉರಿಯುವ ಒಲೆಗಳಿಗೆ ಸಂಜೆಯ ಕೆಲವು ಗಂಟೆಗಳು ಬಿಡುವಿಲ್ಲದ ಕೆಲಸ. ಅಲ್ಲಿ ಹುರಿಯುವ ಶೇಂಗಾ ಕಾಳಿಗೆ, ಬೇಯುವ ಆಮ್ಲೆಟ್ ಗೆ, ಪಾನಿಪುರಿಗೆ, ಗೋಭಿ ಮಂಚೂರಿಗೆ.. ಆಹಾ ಆ ರುಚಿಗೆ ಮನಸೋಲದವರಾರು?
ಸೌತೆಕಾಯಿಯನ್ನು ಕಲಾತ್ಮಕವಾಗಿ ಕತ್ತರಿಸಿ ಖಾದ್ಯಗಳ ಮೇಲಿಟ್ಟು, ಸ್ವಲ್ಪ ನಿಂಬೆಹಣ್ಣಿನ ರಸ ಮತ್ತೆ ಖಾರದ ಪುಡಿ, ಉಪ್ಪನ್ನು ಸವರಿಕೊಟ್ಟರೂ ವ್ಯಾಪಾರಿಯ ಜೇಬು ತುಂಬುತ್ತದೆ ಅಲ್ಲವೇ? ಪಕ್ಕದಲ್ಲಿ ಪಂಚತಾರಾ ಹೊಟೇಲುಗಳಿದ್ದರೂ ಜನ ಈ ರುಚಿಗೆ ಮನಸೋತು, ತಳ್ಳು ಗಾಡಿಗಳು ತಮ್ಮ ಕೆಲಸ ಪ್ರಾರಂಭಿಸುತ್ತಿದ್ದಂತೆ ಮುಗಿ ಬೀಳಲು ಹಾತೊರೆಯುತ್ತಾರೆ. ಇದೆಂತಹ ಸಮುದಾಯ ಮೋಡಿಯ ಸಂಗತಿಯೋ ನೋಡಿ ?
ಕುರುಕಲು ತಿಂಡಿಯ ತಳ್ಳುಗಾಡಿಯವರದು ನಿತ್ಯ ಸಂಜೆ ಕೆಲವೇ ಗಂಟೆಗಳ ವ್ಯಾಪಾರ. ಅದು ಶಹರ ದೊಡ್ಡದಿರಲಿ ಅಥವಾ ಸಣ್ಣದಿರಲಿ ಜನಕೂಡ ಸಂಜೆಯ ಹೊತ್ತಿನಲ್ಲಿ ಬಿಡುವು ಮಾಡಿಕೊಂಡು ಈ ಸಂಚಾರಿ ಹೊಟೇಲುಗಳಿಗೆ ಬಂದು ತಮಗಿಷ್ಟವಾದ ಖಾದ್ಯಗಳನ್ನು ಕುಟುಂಬ ಸಮೇತ ಸೇವಿಸುತ್ತಾರೆ. ಕಡಿಮೆ ಬೆಲೆಗೆ, ಬಾಯಿ ಚಪಲಕ್ಕೆ, ರುಚಿ ರಸಿಕತೆಯಿಂದ ಹೆಚ್ಚು ತಿನ್ನಬಹುದು ಎಂಬ ಸಣ್ಣ ದುರಾಸೆಯಿಂದಲೂ ಇರಬಹುದು!
ಮೊದಲು ಇದು ಬಡವರಿಂದ, ಬಡವರಿಗಾಗಿ ನಡೆಸಲ್ಪಡುವ ‘ವಡಾಪಾವ್’ ವ್ಯಾಪಾರ ಎಂದು ಕರೆಯಲ್ಪಡುತ್ತಿತ್ತು. ಈಗ ಎಲ್ಲ ವರ್ಗದ ಜನರಿಗೂ ಇದು ಆಕರ್ಷಣೀಯವಾಗಿ ಪರಿಣಮಿಸಿದೆ. ಹುಬ್ಬಳ್ಳಿಯಲ್ಲಿ ತಳ್ಳುಗಾಡಿಯನ್ನೇ ಬದುಕಿಗೆ ಆಧಾರವನ್ನಾಗಿರಿಸಿಕೊಂಡಿರುವ ಸೋಮು ಕುಮುಟಾದಿಂದ ಬಂದು ಇಲ್ಲಿ ನೆಲೆಸಿದವರು. ಮೊದಲು ಹುಬ್ಬಳ್ಳಿಯ ಎ.ಪಿ.ಎಮ್.ಸಿಯಲ್ಲಿ ಅವರಿಗೆ ಒಂದು ತಳ್ಳುಗಾಡಿ ಇತ್ತು. ಅದರಲ್ಲಿ ಮೋಟೆಯನ್ನು ಹೊತ್ತು ಅಂಗಡಿಗಳಿಗೆ ಸಾಗಿಸುವ ಕೆಲಸ ಮಾಡುತ್ತಿದ್ದರು. ಅದರೆ ಒಂದು ಸಣ್ಣ ಅಪಘಾತವಾಗಿ ಆ ಗಾಡಿ ಮುರಿದು ಹೋಯಿತು. ಅದನ್ನು ರಿಪೇರಿ ಮಾಡಿದರೂ ಅದು ಮೋಟೆಗಳನ್ನು ಎಳೆಯುವಂತಿರಲಿಲ್ಲ. ಅದರ ಚಕ್ರ ಸಂಪೂರ್ಣ ಮುರಿದಿತ್ತು. ಅದನ್ನು ಹಾಕಿಸುವ ಹಣವು ಅವರಲ್ಲಿ ಇರಲಿಲ್ಲ.
ಹಾಗಾಗಿ ಗಾಡಿಯನ್ನು ನಿಂತಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವುದು ಅನಿವಾರ್ಯವಾಯಿತು. ಆಗ ಅವರಿಗೆ ಹೊಳೆದದ್ದು ಈ ವ್ಯಾಪಾರ. ಹಾಗಾದರೆ ಹೇಗಿದೆ ಇವರ ವ್ಯಾಪಾರ? ಉತ್ತರಿಸುವಾಗ ಸೋಮು ಮುಖದಲ್ಲಿ ಕೊಂಚ ನಗು ಮೂಡುತ್ತದೆ. ವ್ಯಾಪಾರದ ಗುಟ್ಟು ಬಿಟ್ಟುಕೊಡದ ಜಾಣ್ಮೆ ಅವರಲ್ಲಿದೆ. "ಎ.ಪಿ.ಎಂ.ಸಿ ಯಲ್ಲಿ ಗಾಡಿ ತಳ್ಳುತ್ತಿದ್ದಾಗ ದಿನಕ್ಕೆ ೧೦೦ ರೂಪಾಯಿ ಸಿಗುತ್ತಿರಲಿಲ್ಲ. ಆದರೆ ಈಗ ಮಗನಿಗೆ ಇಂಜಿನಿಯರಿಂಗ್ ಓದಿಸುತ್ತಿದ್ದೇನೆ. ಮಗಳು ಎಮ್.ಎಸ್.ಡಬ್ಲು ಓದುತ್ತಿದಾಳೆ. ಒಂದು ಚಿಕ್ಕ ಸೂರು ಸಹ ಕಟ್ಟಿಕೊಂಡಿದ್ದೇನೆ" ಎಂದು ಧನ್ಯತೆ ಮೆರೆಯುತ್ತಾರೆ.
ಈ ತಳ್ಳು ಗಾಡಿಗಳು ಸೋಮು ಅವರಂತೆ ಪ್ರಾಮಾಣಿಕವಾಗಿ ದುಡಿದು, ಸ್ವಾವಲಂಬಿಯಾಗಿ ಬದುಕಬೇಕು ಎಂಬುವವರಿಗೆ ಪ್ರೇರಣಾದಾಯಿ. ಕಡಿಮೆ ಬಂಡವಾಳ, ಹೆಚ್ಚು ಲಾಭ ಬಯಸುವವರಿಗೆ ಅನುಕೂಲಕರವಾಗಿದೆ. ಈ ಗಾಡಿ ಬಳಸಿ ವ್ಯಾಪಾರ, ವ್ಯವಹಾರ ಮಾಡುವುದಕ್ಕೆ ಪರವಾನಗಿ ಶುಲ್ಕವೆಂದು ೨೫/- ರಿಂದ ೧೦೦/- ವರೆಗೆ ಕರ ವಿಧಿಸಲಾಗುತ್ತದೆ. ಬ್ಯಾಂಕುಗಳು ಕೂಡಾ ಈ ಗಾಡಿಯನ್ನು ಖರೀದಿಸಲು ಸಾಲವನ್ನು ನೀಡುತ್ತವೆ.
ಕಾಯಿದೆ ಪ್ರಕಾರ ಒಂದು ಕಡೆ ನಿಲ್ಲದೇ ನಿರಂತರ ಜಂಗಮರಾಗಿ ವ್ಯಾಪಾರ ಮಾಡಬೇಕೆಂಬ ನಿಯಮವಿದೆ. ಜೊತೆಗೆ ಉಳಿದ ಅಂಗಡಿ, ಹೊಟೇಲುಗಳವರ ತಕರಾರು ಬೇರೆ. ಅದಕ್ಕಾಗಿ ಉದ್ಯಾನ, ಕ್ರೀಡಾಂಗಣ, ಬಯಲು ನಾಟ್ಯ ಮಂದಿರಗಳು, ರಂಗ ಮಂದಿರಗಳು, ಸಿನೇಮಾ ಗ್ರಹಗಳು, ಕಾಲೇಜು ಹೊರವಲಯ ಸೇರಿದಂತೆ ಮತ್ತಿತರ ಖಾಲಿ ಇರುವ ಜನನಿಬಿಡ ಪ್ರದೇಶಗಳಲ್ಲಿ ವ್ಯಾಪಾರ ಮಾಡುತ್ತೇವೆ ಎನ್ನುತ್ತಾರೆ ಸೋಮು. ಇದಲ್ಲದೆ ತರಕಾರಿಗಳನ್ನು, ಹಾಲಿನ ಪ್ಯಾಕೇಟುಗಳನ್ನು, ಹಣ್ಣುಗಳನ್ನು ಸಹ ಕೆಲವು ವ್ಯಾಪಾರಿಗಳು ಈ ತಳ್ಳುಗಾಡಿಗಳಲ್ಲಿ ಹಾಕಿಕೊಂಡು ಮನೆಮನೆಗೆ ಮಾರುತ್ತಾರೆ. ಮಹಿಳೆಯರೂ ಇದಕ್ಕೆ ಹೊರತಲ್ಲ.
ಇತ್ತೀಚೆಗೆ ಈ ತಳ್ಳು ಗಾಡಿಯನ್ನು ತಯಾರಿಸುವುದರಲ್ಲೂ ಅಂಗಡಿಯವರು ಲಾಭಗಳಿಸುತ್ತಿದ್ದಾರೆ. ಮರದ ಅಥವಾ ಪ್ಲಾಸ್ಟಿಕ್ ಹಲಗೆ, ಅದಕ್ಕೊಂದು ಸೂರು ನೆರಳಿಗೆ ಆಧಾರವಾಗಿ, ಎರಡು ಚಕ್ರಗಳು ನಾಲ್ಕು ಖಂಬ ಇಷ್ಟರಲ್ಲಿಯೇ ಮೊದಲು ಗಾಡಿ ಮುಗಿಯುತ್ತಿತ್ತು. ಈಗ ಅದರಲ್ಲೂ ವಿವಿಧ ಅಲಂಕಾರಿಕ ರೂಪಗಳು ನಿರ್ಮಾಣಗೊಳ್ಳುತ್ತಿವೆ.
ಹಾಗಾಗಿ ಉದ್ಯೋಗವಿಲ್ಲ ಎಂದು ಕೊರಗುವ ಯುವಕರಿಗೆ ತಮ್ಮದೇ ಆದ ಸುಂದರ ಬದುಕನ್ನು ಕಟ್ಟಿಕೊಳ್ಳಲು ನಮ್ಮ ಸೋಮು ಮಾದರಿಯಾಗಿದ್ದಾರೆ. ಸ್ವಯಂ ಉದ್ಯೋಗದಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿ, ಸ್ವಾಭಿಮಾನದ ಬದುಕು ತಮಗೂ ತಮ್ಮ ಕುಟುಂಬಕ್ಕೂ ಕಲ್ಪಿಸಿ ಏಳಿಗೆ ಸಾಧಿಸಿರುವ ಸೋಮು ನಮಗೆ ಅನುಕರಣೀಯರಾಗಿ ನಿಲ್ಲುತ್ತಾರೆ.
ಹಾಗಿದ್ದರೆ ತಡಯಾಕೆ? ಒಂದು ಸಾರಿ ಸೋಮು ಅವರ ಹೊಟೇಲಿಗೆ ಭೇಟಿ ನೀಡಿ. ಅಲ್ಲಿರುವ ಖಾದ್ಯಗಳನ್ನು ಸವಿಯಿರಿ. ತಾವು ಕಲಿಯದಿದ್ದರೂ ತಮ್ಮ ಮಕ್ಕಳು ಕಲಿಯಲೆಂದು ಅವಿರತ ಶ್ರಮ ಪಡುತ್ತಿರುವ ಸೋಮು ಅವರ ಸ್ವಾಭಿಮನಿ ಬದುಕಿಗೆ ನಮ್ಮ ಕೈಲಾದ ಸಹಾಯ ಅದಾಗಬಲ್ಲದು.
ನಮ್ಮ ಸಂಸಾರದಲ್ಲಿ ಸೋಮು ಅವರಂತಹ ಇಂತಹ ಚಿಕ್ಕ ಚಿಕ್ಕ ದೀಪಗಳೇ ಕುಲ ಸಂಸಾರದ ನಿಜ ಕುಲದೀಪಗಳು ಎಂಬುದರಲ್ಲಿ ಸಂಶಯವಿಲ್ಲ.
೪ನೇ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯.
ಬೇಸಿಗೆ ಎಂದು ಮರುಗದಿರಿ..ತಂಪೆರೆಯಲು ಮುರುಗಲಿದೆ.
Friday, March 13, 2009

ನಮ್ಮದೇ ಆದ ಮನೆಮದ್ದು ಅಥವಾ ಪಾರಂಪರಿಕ ಜ್ಞಾನಕ್ಕೆ ಮೊರೆ ಹೋಗುವ ಮೂಲಕ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ತಮಗೆ ಆಶ್ಚರ್ಯವಾಯಿತೇ? ಬೇಸಿಗೆಯ ಬೇಗೆ ತಣಿಸಲು ಮುರುಗಲು ಪೇಯ ಈಗ ವಿಶೇಷ ಸ್ಥಾನ ಪಡೆಯುತ್ತಿದೆ.
ಮಲೆನಾಡಿನಲ್ಲಿ ಬೇಸಿಗೆಯಲ್ಲಿ ಆಸರೆಗೆಂದು ‘ಕೋಕಂ’ ಬಳಸುವುದು ಖಾಯಂ. ಈ ಮುರುಗಲು ಹಣ್ಣಿನ ಪೇಯ ಪ್ರತಿ ಮನೆಯಲ್ಲಿ ಬೇಸಿಗೆಯ ಆದರಾಥಿತ್ಯದ ಸಂಕೇತ. ಈಗೀಗ ಕರ್ನಾಟಕದ ಹಲವೆಡೆ ತೀವ್ರಗತಿಯಲ್ಲಿ ಜನಪ್ರಿಯಗೊಳ್ಳುತ್ತಿರುವ ತಂಪು ಪಾನೀಯ ಕೋಕಂ ಎನ್ನಬಹುದು.


ಗಣಪತಿ ಹೆಗಡೆ
ಎಂ.ಎ.ಜೆ.ಎಂ. ೪ನೇ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯.
ಕೊಳ್ಳುವವರಿಗೆ ಬೆತ್ತ ಕಲೆ; ಕುಶಲಕರ್ಮಿಗೆ ಬಾಸುಂಡೆ
Saturday, March 7, 2009
ನಿಮ್ಮ ಮನೆಗಳಲ್ಲಿ ಬೆತ್ತದ ಕುರ್ಚಿಗಳಿವೆಯೇ? ದಿವಾನಗಳಿವೆಯೇ? ಕನಿಷ್ಠ, ಝೂಲಾ ಇರಬಹುದಲ್ಲ? ಅಥವಾ ಅದಕ್ಕೆ ಸಂಬಂಧಿಸಿದ ಯಾವುದಾದರೂ ಅಲಂಕಾರಿಕ ಉಪಕರಣಗಳಿವೆಯೇ? ಹಳೆಯ ಮನೆಗಳಲ್ಲಿ ಅವಿಭಾಜ್ಯ ಅಂಗವಾಗಿದ್ದ ಬೆತ್ತ ಈಗ ಹೊಸ ಮೆನಗಳಲ್ಲಿ ಅಲಂಕಾರಿಕ ವಸ್ತುವಾಗಿ ಪರಿಣಮಿಸಿದೆ. ಬೆತ್ತ ರೂಪದಿಂದ ಈ ಮನಸೆಳೆಯುವ ಅಲಂಕಾರಿಕ ರೂಪಕ್ಕೆ ತಂದವರ ಪರಿಶ್ರಮ ಎಷ್ಟಿರಬೇಕು? ಅದು ಅಮೂಲ್ಯವಾದುದು.
ಬೆತ್ತವನ್ನು ನೇಯುವ ಕುಶಲಕರ್ಮಿಗಳು ಮೂಲತ: ಕೇರಳದ ಅಲವಾಡಿ ಊರಿನವರು. ಸದ್ಯ ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿ ಕಳೆದ ಹಲವಾರು ದಶಕಗಳಿಂದ ಬಿಡಾರ ಹೂಡಿದ್ದಾರೆ. ಬೆತ್ತದಲ್ಲಿ ಕಲೆ ಅರಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಅವರ ಅನ್ನಕ್ಕೆ ಈ ಕಲೆ ಆಧಾರವಾದರೂ ಅಪರೂಪದ ಕಲೆಯನ್ನು ಅಪ್ರಜ್ಞಾಪೂರ್ವಕವಾಗಿ ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ.
ಅವರ ಮಾತುಗಳಲ್ಲೇ ಆ ಅನುಭವ ಕೇಳಬೇಕು. "ನಮ್ಮ ಮನ್ಯಾಗ ಭಾಳ ಹಿಂದಿಂದ..ಅಂದ್ರ ಅಜ್ಜಾ-ಅಮ್ಮಗಳ ಕಾಲದಿಂದ ಈ ಬೆತ್ತ ನೇಯ್ಯುವ ಕೆಲಸ ಮಾಡಕೋತ ಬಂದಾರ. ನಮಗೂ ಸಾಲಿ ಬದ್ಲಿ ಈ ಕೆಲಸಾನ ಹೆಚ್ಚ ಒತ್ತಕೊಟ್ಟು ಕಲಿಸ್ಯಾರ. ನಮಗ ಈ ಕೆಲಸ ಬಿಟ್ರ..ಉಳದ ಯಾವ ಕೆಲಸ ಅಷ್ಟಕಷ್ಟ. ಆದ್ರ ನಮಗ ಬೇಕಾಗಿರೋ ಬೆತ್ತ ಈಗ ಸಿಗಾಕತಿಲ್ಲ. ಇಂದು ಇಲ್ಲೆ ನಾಳೆ ಮತ್ತೊಂದ ಕಡೆ. ಹೀಂಗ ಈ ಕಲೆಯನ್ನ ಕೈಗೆತ್ತಿಕೊಂಡು ಜೀವನ ಸಾಗಿಸ್ತಿದ್ದೇವೆ" ಅವರ ಮನದಾಳದ ಮಾತುಗಳಿವು.
ಅವರದು ಅವಿಭಕ್ತ ಕುಟುಂಬ. ದಿವಾನ, ಸೋಫಾ, ಟಿಪಾಯಿ, ಮಕ್ಕಳ ಖುರ್ಚಿಗಳು, ಜೋಕಾಲಿ ಹೀಗೆ ಬೆತ್ತದಿಂದ ಎಲ್ಲ ರೀತಿಯ ಉಪಯುಕ್ತ ಅಲಂಕಾರಿಕ ವಸ್ತುಗಳನ್ನು ಅವರು ತಯಾರಿಸುತ್ತಾರೆ. ಅವರು ಬಹಳ ಕಷ್ಟಪಟ್ಟು ತಯಾರಿಸಿದ ಉಪಕರಣಗಳನ್ನು ಮಧ್ಯವರ್ತಿಗಳು ಬಹಳ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಮಾರುಕಟ್ಟೆಯ ಏರಿಳಿತಗಳ ಬಗ್ಗೆ, ವ್ಯವಹಾರದ ಅಂದಾಜು ಇವರಿಗೆ ಸರಿಯಾಗಿ ತಿಳಿದಿಲ್ಲ. ಹಾಗೆಯೇ ಮೊದಲು ಅರಣ್ಯ ಇಲಾಖೆ ಇವರಿಗೆ ಬೆತ್ತದ ಕಚ್ಚಾಸಾಮಗ್ರಿಗಳನ್ನು ಒದಗಿಸುತ್ತಿತ್ತು. ಆದರೆ ಇಂದು ಇಲಾಖೆ ಬೆತ್ತದ ಪೂರೈಕೆಯನ್ನು ಮಿತಿಗೊಳಿಸಿದೆ. ಸಾಮಾನ್ಯವಾಗಿ ಮನೆಮಂದಿ ಎಲ್ಲರೂ ಸೇರಿ ಈ ಕರಕುಶಲ ಕೆಲಸ ಮಾಡುತ್ತಾರೆ.ಆದರೆ ದೊಡ್ಡ ಕೈಗಾರಿಕೆಗಳ ಪೈಪೋಟಿ ಬೇರೆ ಇವರನ್ನು ಸದಾ ಕಾಡುತ್ತಿದೆ.
ಎಂ.ಎ.ಜೆ.ಎಂ.
೪ ಸೆಮ್.
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ- ೨೯
ಹೊಸಯಲ್ಲಾಪುರದ ಕಹಿ ಕೆರೆಯ ಮಧ್ಯೆ ಸಿಹಿ ಬಾವಿ

ಕಾಯಕದಲ್ಲಿ ಕೈಲಾಸ ಕಾಣುವ ಟಿ. ಸೋಮಶೇಖರ
Thursday, March 5, 2009

ಇಂಥವರನ್ನು ನೋಡಬೇಕೆ? ಮಾತನಾಡಿಸಬೇಕೆ ಅಂತಹ ಒಬ್ಬ ವಿಶಿಷ್ಟ ಶ್ರಮ ಜೀವಿಯನ್ನು? ಧಾರವಾಡದ ಗಾಂಧಿನಗರಕ್ಕೆ ಬನ್ನಿ. ನೋಡಲು ಆಕಷರ್ಕವಾಗಿ ಕಾಣುವ ಸಾಣಿಗೆಗಳು, ಅಷ್ಟೆ ಸುಂದರವಾದ ಸೇರುಗಳು. ಕೂಡಲೇ ಮನೆಗೆ ಕೊಂಡೊಯ್ಯಬೇಕು ಎಂಬ ತುಡಿತ ನಿಮ್ಮಲ್ಲಿ ಉಂಟಾಗದೇ ಇರದು. ಹುಟ್ಟಿದಾರಭ್ಯ ಪೋಲಿಯೊ ಪೀಡಿತನಾದರೂ ವಂಶಪಾರಂಪರ್ಯವಾಗಿ ಬಂದ ಕಲೆಯನ್ನು ಮುಂದುವರೆಸಿಕೊಂಡು ಬಂದ ಸೋಮಶೇಖರ್ ಅವರ ಉತ್ಸಾಹ ಮೆಚ್ಚುವಂತಹದು.
ಎಲ್ಲವೂ ಸರಿಯಾಗಿದ್ದರೂ, ಜಗತ್ತೇ ತಲೆ ಮೇಲೆ ಬಿದ್ದಂತೆ ಮಾಡುವ ನಾವು ಈತನಿಂದ ಕಲಿಯಬೇಕಾದದ್ದು ಬಹಳವಿದೆ. ಒಂದು ಕಾಲನ್ನು ಪೋಲಿಯೊದಿಂದ ಕಳೆದುಕೊಂಡು ಅಂಗವಿಕಲನಾಗಿರುವ ಸೋಮಶೇಖರ್ ಸಾಣಿಗೆಗಳನ್ನು ತಯಾರಿಸಿ ಧಾರವಾಡದ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಗೂ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡುತ್ತಾರೆ.
ಸೋಮಶೇಖರ್ ಮೂಲತ: ಶಿವಮೊಗ್ಗ ಜಿಲ್ಲೆಯವರು. ಅವರು ಅಂಡಿಜೋಗಿ ಜನಾಂಗಕ್ಕೆ ಸೇರಿದವರು. ಮರಾಠಿ ಭಾಷೆಯಲ್ಲಿ ಮಾತು. ಕಳೆದ ೨ ವರ್ಷಗಳಿಂದ ಧಾರವಾಡದ ಗಾಂಧಿನಗರದಲ್ಲಿ ನೆಲೆಸಿ ಸಾಣಿಗೆಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಕಲೆಯನ್ನು ಕಂಡು ಮಾನವೀಯತೆ ದೃಷ್ಟಿಯಿಂದ ಗಾಂಧಿನಗರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಕಮೀಟಿಯವರು ಬ್ಯಾಂಕ್ ಎದುರಿಗಿನ ಜಾಗವನ್ನು ಯಾವುದೇ ಬಾಡಿಗೆ ಇಲ್ಲದೆ ಕೊಟ್ಟಿದ್ದಾರೆ.ಸೋಮಶೇಖರ್ ಅವರಿಗೆ ೩ ಜನ ಮಕ್ಕಳು, ಮಕ್ಕಳು ವಿದ್ಯಾವಂತರಾಗಬೇಕೆಂದು ಗಾಂಧಿನಗರದ ಶಾಲೆಗೆ ಸೇರಿಸಿದ್ದಾರೆ. ಗುಡಿಸಿಲಿನಲ್ಲಿ ವಿದ್ಯುತ್ ದೀಪವಿಲ್ಲ. ಸೀಮೆ ಎಣ್ಣೆ ಅಥವಾ ಕ್ಯಾಂಡಲ್ ನಿಂದ ಬೆಳಕು. ಇತ್ತೀಚೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬಡಜನರಿಗಾಗಿ ಐಶ್ವರ್ಯ ಸೌರವಿದ್ಯುದೀಪಗಳನ್ನು (Microfinancing Scheme) ಅಡಿಯಲ್ಲಿ ಕೊಡಮಾಡುತ್ತಿದೆ.ಇವರಿಗೊಂದು ದೊರಕಿಸುಕೊಡಬಹುದೇ?
ಕಿರಾಣಿ ಅಂಗಡಿ, ಹೊಟೆಲ್ಗಳಲ್ಲಿ ಇರುವ ತಗಡಿನ ಡಬ್ಬಿಗಳು, ಎಣ್ಣೆಯ ವ್ಯಾಪಾರಸ್ಥರ ಅಂಗಡಿಗಳಲ್ಲಿನ ಮಂಡಿಗಳು ಇವರ ಕಚ್ಚಾ ವಸ್ತುಗಳು.ಈ ತಗಡಿನ ಡಬ್ಬಿಗಳನ್ನು ಸುತ್ತಿಗೆಯಿಂದ ಹೊಡೆದು ಚೌಕಾಕಾರವಾಗಿ ಮಾಡಿ ಸಾಣಿಗೆ , ಹೆರೆಮಣೆ, ಬೇಕರಿ ಟ್ರೇ, ಕೇಕ್ ಬಾಕ್ಸ್ ಮತ್ತಿತರ ವಸ್ತುಗಳನ್ನು ತಯಾರಿಸುತ್ತಾರೆ.
ಈಗಿನ ಯಾಂತ್ರಿಕ ಯುಗದಲ್ಲಿ ಮಿಕ್ಸರ-ಗ್ರ್ಯಾಂಡರ್, ಪ್ಯಾಕ್ಡ್ ಫುಡ್ ಭರ್ಜರಿ ಬಳಕೆಯಲ್ಲಿವೆ. ಸಾಣಿಗೆಗಳ ಮಾರಾಟ ಹೇಗೆ? ಎಂದು ಕೇಳಿದರೆ, ಫ್ಯಾಕ್ಟರಿ ಸಾಣಿಗೆಗಳಲ್ಲಿ ಬಹಳ ದೊಡ್ಡ-ದೊಡ್ಡ ರಂಧ್ರಗಳಿರುವುದರಿಂದ ಬೇಡಿಕೆ ಕಡಿಮೆ. ತಮ್ಮ ಸಾಣಿಗೆಗಳಿಗೆ ಬೇಡಿಕೆ ಹೆಚ್ಚು. ಅಲ್ಲದೇ ಹಳ್ಳಿಗಾಡಿನ ಪ್ರದೇಶದಲ್ಲಿ ಜನರು ಹೆಚ್ಚು-ಹೆಚ್ಚು ಕೊಂಡುಕೊಳ್ಳುತ್ತಾರೆ. ಅದೇ ರೀತಿ ಬೇಕರಿಗಳಲ್ಲಿ ಉಪಯೋಗಿಸುವ ಬೇಕರಿ ಟ್ರೇ, ಕೇಕ್ ಬಾಕ್ಸ್ ಮೌಲ್ಡ್ ಗೂ ಅಲ್ಪ-ಸಲ್ಪ ಬೇಡಿಕೆ ಇದೆ ಎನ್ನುತ್ತಾರೆ ಸೋಮಶೇಖರ.
೨೫ ತಗಡಿನ ಡಬ್ಬಿಗಳನ್ನು ಸಾಣಿಗೆಯಾಗಿ ಮಾಡಲು ೩ ದಿನ ಬೇಕಾಗುತ್ತದೆ. ೧ ದಿನಕ್ಕೆ ೫೦ ಸಾಣಿಗೆಗಳು ಮಾರಾಟವಾದ ಉದಾಹರಣೆ ಇದೆ. ಒಂದಕ್ಕೆ ಹೋಲ್ ಸೇಲ್ ದರದಲ್ಲಿ ೧೮-೨೦ ರೂಪಾಯಿಗೆ ಕೊಡುತ್ತೇವೆ. ಇದರಿಂದ ದಿನಕ್ಕೆ ೧೦೦-೧೫೦ ರೂಪಾಯಿ ಹಣ ಸಿಗುತ್ತದೆ. ಇದರಲ್ಲಿ ಖರ್ಚು ತೆಗೆದು ೮೦-೧೦೦
ರೂಪಾಯಿ ಉಳಿತಾಯವಾಗಿ ತಿಂಗಳಿಗೆ ೨೫೦೦ ರೂಪಾಯಿ ಆದಾಯ ಬರುತ್ತದೆ. ಅಂತೂ-ಇಂತೂ ಬದುಕು ಅಷ್ಟರಲ್ಲಿಯೇ ನಡೆದಿದೆ ಎಂದು ತಮ್ಮ ಸಾಹಸ ಹೇಳಿಕೊಂಡರು.
ಮಾಡುವ ಕೆಲಸಕ್ಕೆ ಸರಿಯಾಗಿ ಆದಾಯ ಬಾರದಿದ್ದರೆ ಕೈಕಟ್ಟಿ ಕುಳಿತುಕೊಳ್ಳದೇ ಛತ್ರಿ ರಿಪೇರಿ, ಬೀಗ ರಿಪೇರಿ, ಹಾಗೂ ಬ್ಯಾಟರಿ ರಿಪೇರಿಗಳನ್ನು ಊರು-ಊರುಗಳಿಗೆ ಹೋಗಿ ರಿಪೇರಿ ಮಾಡಿ ಜೀವನ ನಡೆಸುತ್ತೇನೆ ಎಂದು ಉತ್ಸಾಹಿ ಯುವಕ ಟಿ.ಸೋಮಶೇಖರ ಹೇಳುತ್ತಾರೆ.
ಅಬ್ಬಾ! ಅವರ ಅದಮ್ಯ ಶ್ರಮ ಜೀವನಕ್ಕೆ ಹಾಗೂ ಜೀವನ ಪ್ರೀತಿಗೆ ಹ್ಯಾಟ್ಸ್ ಆಫ್.
ವಸೀಮ್ ಭಾವಿಮನಿ
ಎಂ.ಎ.ಜೆ.ಎಂ. ೪ನೇ ಸೆಮೆಸ್ಟರ್
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ.
ಗಿಡಗಳಿಗೆ ಕಸಿ; ರೈತನಿಗೆ ಖುಷಿ!
Tuesday, March 3, 2009
ನಮ್ಮದು ಕೃಷಿ ಸಂಸ್ಕೃತಿ ರಾಷ್ಟ್ರ. ಇಲ್ಲಿ ಕೃಷಿ ವ್ಯವಹಾರ ಅಲ್ಲ. ರೈತ ತನ್ನ ಜೀವನೋಪಾಯಕ್ಕಾಗಿ ಕಂಡುಕೊಂಡ ಉದ್ಯೋಗ ವ್ಯವಸಾಯ. ಆದರೆ ಅಭಿವೃದ್ಧಿ ರಥದ ಅಡಿಯಲ್ಲಿ ಸಿಲುಕಿದ ರೈತಾಪಿ ವರ್ಗ, ‘ದೇಶದ ಆರ್ಥಿಕತೆಯ ಬೆನ್ನೆಲುಬು’ ಎಂಬುವಂತೆ ಬಿಂಬಿಸಲ್ಪಟ್ಟು, ದೇಶ ನಡೆಸುವ ನೊಗವನ್ನೇ ಹೊತ್ತಂತೆ ಯೋಚಿಸಿದೆವು.
ಕಾಲ ಬದಲಾಗುತ್ತಾ ಬಂತು. ರೈತನೂ ಆಮಿಷಗಳಿಂದ ದೂರ ಉಳಿಯಲು ಸಾದ್ಯವಾಗಲಿಲ್ಲ. ತನ್ನ ಅಪರಿಮಿತ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಹೆಚ್ಚಿನ ದುಡಿಮೆ ಅನಿವಾರ್ಯವಾಯಿತು. ‘ಗಳಿಕೆ-ಖರ್ಚು-ದುಡಿಮೆ-ಗಳಿಕೆ’ ಈ ವರ್ತುಲ ಬ್ರಹ್ಮಾಂಡದೆತ್ತರ ಬೆಳೆಯಲು ನೀರೆರೆದಿದ್ದು ನಮ್ಮ ಬುದ್ಧಿಶಕ್ತಿ . ಹಾಗಾಗಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಹಾಗು ಲಾಭ ಪಡೆಯಲು ಈ ಕಸಿ ಪದ್ಧತಿ ಬೆಳಕಿಗೆ ಬಂದಿತು.


೧ ಹಳೆಯ ತಳಿಗಳ ಪುನರ್ ಸಂಸ್ಕರಣೆ ಹಾಗು ಅಭಿವೃದ್ಧಿ.
೨ ಅಲಂಕಾರಿಕ ಸಸ್ಯಗಳ ಅಭಿವೃದ್ಧಿ.
ಹಾಗೆಯೇ ಕಸಿ ಪದ್ಧತಿ ಹಲವಾರು ವಿಧಗಳನ್ನು ಹೊಂದಿದೆ. ಅವುಗಳೆಂದರೆ

೧ ಆಯ್ ಬಡ್ಡಿಂಗ್
೨ ಪ್ಯಾಚ್ ಬಡ್ಡಿಂಗ್
ಜಲ ಶುದ್ಧೀಕರಣ ಘಟಕದಿಂದ ಅಮ್ಮಿನಬಾವಿಯ ಎರಡು ಕೆರೆಗಳು ಅಶುದ್ಧ!
Tuesday, February 24, 2009


ಪಿ.ಜಿ.ಡಿ.ಜೆ.ಎಂ. ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ ಹುಬ್ಬಳ್ಳಿ- ೨೯
೭ ದಶಕಗಳು ನವಲಗುಂದಕ್ಕೆ ನೀರುಣಿಸಿದ ನೀಲಮ್ಮನ ಕೆರೆ ಈಗ ಇತಿಹಾಸ ಪುಟಕ್ಕೆ.
ನೀರಿಗೂ ನವಲಗುಂದಕ್ಕೂ ದಶಕಗಳ ಎಣ್ಣೆ-ಸೀಗಿಕಾಯಿ ಸಂಬಂಧ! ಕುಡಿಯುವ ನೀರಿನ ಬರ ಎಂದರೆ ನವಲಗುಂದದ್ದು ಎಂಬುವಷ್ಟು ಜನಜನಿತ ಇಲ್ಲಿನ ಪರಿಸ್ಥಿತಿ. 'ನೀರಿಲ್ಲದ ಊರು ನವಲಗುಂದ' ಕ್ಕೆ ಕುಡಿಯುವ ನೀರಿನ ಕೆರೆಯನ್ನು ೧೯೩೮ರಲ್ಲಿ ಕಟ್ಟಿಸಿ, ಪುಣ್ಯ ಕಟ್ಟಿಕೊಂಡವರು ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯರ ಸಹೋದರಿ ನೀಲಮ್ಮನವರು. ಅನೇಕ ದಶಕಗಳಿಂದ ಇಡೀ ನವಲಗುಂದ ಊರಿಗೆ ಅವರ ಹೆಸರಿನಲ್ಲಿಯೇ ಇರುವ ಈ ಕೆರೆ ಜೀವದಾಯಿಯಾಗಿತ್ತು. ಶಿರಸಂಗಿಯ ಲಿಂಗರಾಜ ದೇಸಾಯರು ತಮ್ಮ ತಂಗಿ ನೀಲಮ್ಮನವರಿಗೆ ೧೯ ಎಕರೆ ಜಮೀನನ್ನು ಕಾಣಿಕೆಯಾಗಿ ನೀಡಿದ್ದರು. ಆದರೆ ಈ ತಾಯಿ ನವಲಗುಂದದ ಜನಕ್ಕೆ ಸ್ವಚ್ಛ ಕುಡಿಯುವ ನೀರು ಒದಗಿಸುವ ಘನ ಉದ್ದೇಶದಿಂದ ತಮ್ಮ ಜಮೀನಿನಲ್ಲಿಯೇ ದೊಡ್ಡ ಕೆರೆಯನ್ನು ನಿರ್ಮಿಸಿದರು. ಜನತೆಗೆ ಕುಡಿಯುವ ನೀರನ್ನು ಒದಗಿಸಿ ಅವಿಸ್ಮರಣೀಯ ಕಾರ್ಯ ಮಾಡಿದರು.
ಎಂ.ಎ.ಜೆ.ಎಂ. ಪ್ರಥಮ ವರ್ಷದ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯
ಪರಿಸರದ ಪ್ರತಿ ಪ್ರೀತಿ ಇಲ್ಲದ ಪ್ರೇಮಿಗಳ ತಾಣ: ನೃಪತುಂಗ ಬೆಟ್ಟ.



ಎಂ.ಎ.ಜೆ.ಎಂ. ಪ್ರಥಮ ಸೆಮ್ ವಿದ್ಯಾರ್ಥಿನಿ
ಐ.ಎಂಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ ಹುಬ್ಬಳ್ಳಿ- ೨೯
ತೋಳನಕೆರೆಯ ಅಳಲಿನ ಕಥೆ
ತೋಳನಕೆರೆಯು ಈಗ ನಾಡತೋಳಗಳ ದಾಳಿಗೆ ಸಿಲುಕಿ 'ತೋಳನಕೇರಿ' ಆಗುವತ್ತ ದಾಪುಗಾಲು ಇಡುತ್ತಿದೆ!
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ೩೫ನೇ ವಾರ್ಡಿನ ತೋಳನಕೆರೆಯ ಒಟ್ಟು ವಿಸ್ತೀರ್ಣ ೨೩ ಎಕರೆ, ೩೨ ಗುಂಟೆ.
ವಾಣಿಜ್ಯ ನಗರಿಯ ವಾಣಿಜ್ಯ ಪಟುಗಳ ಕಣ್ಣು ಕುಕ್ಕದಿರುತ್ತದೆಯೇ? ಕೆರೆಯ ಸುತ್ತಲೂ ವ್ಯವಸ್ಥಿತ ಬಡಾವಣೆ ನಿರ್ಮಾಣಗೊಂಡು ದಶಕವೇ ಉರುಳುತ್ತಿದೆ. ಅತಿಕ್ರಮಣದ ಪರಿಣಾಮವಾಗಿ ಸದ್ಯ ೧೦ ರಿಂದ ೧೨ ಎಕರೆಗಳಷ್ಟು ಮಾತ್ರ ಕೆರೆ ಉಳಿದಿದೆ. ಸುತ್ತಲೂ ಅಷ್ಟೇ ಅವ್ಯವಸ್ಥೆ ರಾರಾಜಿಸುತ್ತಿದೆ. ಬಡಾವಣೆಯ ಫಲವಾಗಿ ಗಬ್ಬೆದ್ದು ನಾರುವ ಹೊಲಸೆಲ್ಲವನ್ನು ತನ್ನ ಉದರದಲ್ಲಿ ತುಂಬಿಕೊಂಡು ಮೂಕ ವೇದನೆ ಕೆರೆ ಅನುಭವಿಸುತ್ತಿದೆ.
೧೯೮೦ರಲ್ಲಿ ಇದೊಂದು ನಯನಮನೋಹರ ಕೆರೆಯಾಗಿತ್ತು. ಈ ಕೆರೆಯ ನೀರನ್ನು ಸುತ್ತಲಿನ ಬಡಾವಣೆಗಳಲ್ಲಿ ಬಳಸಲಾಗುತ್ತಿತ್ತು. ಪಟ್ಟಣ ಬೆಳೆದಂತೆ ಕೆರೆಯ ಸುತ್ತಲೂ ವಸತಿ ಸಂಕೀರ್ಣ ನಿರ್ಮಾಣಗೊಂಡಿತು. ಈಗ ಅದು ಕೇರಿ. ರವಿ ನಗರ, ಬಸವೇಶ್ವರ ನಗರ, ಲಕ್ಷ್ಮೀ ನಗರ, ಮಠಪತಿ ಲೇಔಟ್, ರೇಣುಕಾನಗರ, ಗಾಂಧಿ ನಗರ, ವಿವೇಕಾನಂದನಗರ, ಸೆಂಟ್ರಲ್ ಎಕ್ಸೈಜ್ ಕಾಲೋನಿ, ನೆಹರೂ ನಗರ ಒಂದನೇ ಹಂತ, ಕುಮಾರ ಪಾರ್ಕ್, ಸನ್ಮಾರ್ಗ ನಗರ, ಕಲ್ಬುರ್ಗಿ ಲೇಔಟ್, ಪದ್ಮಾವತಿ ಹೌಸಿಂಗ್ ಸೊಸಾಯಿಟಿ, ಗಣೇಶ್ ಲೇಔಟ್ ಹೀಗೆ ಅನೇಕ ಬಡಾವಣೆಗಳ ಒಳಚರಂಡಿ ನೀರನ್ನು ತೋಳನಕೆರೆಗೆ ಹರಿ ಬಿಡಲಾಗುತ್ತಿದೆ. ಹೀಗಾಗಿ ಮೊದಲು ಉಪಯೋಗಿಸಲು ಯೋಗ್ಯವಾಗಿದ್ದ ನೀರು ಈಗ ಚರಂಡಿ ನೀರಾಗಿ ಪರಿವರ್ತನೆಗೊಳ್ಳುತ್ತಿದೆ. ಈ ನೀರಿನ ದುರ್ವಾಸನೆ ಹಾಗು ಅನಾರೋಗ್ಯಪೂರ್ಣಾ ವಾತಾವರಣದಿಂದಾಗಿ ಜನ ದವಾಖಾನೆಗೆ ನಿತ್ಯ ಎಡತಾಕುವಂತಾಗಿದೆ.
ತೋಳನಕೆರೆಯ ದಂಡೆಯ ಹತ್ತಿರವೇ ವಾಸವಾಗಿರುವ ಶ್ಯಾಮಲಾ ಅವರು ಹೇಳುತ್ತಾರೆ.."ಅಯ್ಯೋ..ಈಗ ಗಬ್ಬು ನಾಥ. ಮೊದಲು ನಾವೆಲ್ಲ ಕುಡಿಯಾಕ ಬಳಸ್ತಿದ್ವಿ. ಈಗ ಕಸ ಹಾಕೋ ತೊಟ್ಟಿ ಥರ ಆಗಿಹೋಗೇತಿ. ನಮ್ಮ ಜನಕ್ಕೂ ಕಾಳಜಿ ಅಷ್ಟಕ್ಕಷ್ಟ".
ಕಳೆದ ೪ ವರ್ಷಗಳಿಂದ ನಗರದ ವಿವಿಧ ಬಡಾವಣೆಗಳಿಂದ ಹೊತ್ತು ತರಲಾದ ಮಣ್ಣು, ಕಾಂಕ್ರೀಟ್ ತ್ಯಾಜ್ಯವನ್ನು ಕೆರೆಗೆ ಹಾಕಿ ಹೂಳು ತುಂಬುವಂತೆ ಸಹ ಮಾಡಲಾಗುತ್ತಿದೆ. ಕೆರೆಯ ಈ ದಯನೀಯ ಪರಿಸ್ಥಿತಿ ಗಮನಕ್ಕೆ ಬರುತ್ತಲೇ ಅವಳಿ ನಗರ ಪಾಲಿಕೆಯ ಅಂದಿನ ಆಯುಕ್ತರಾಗಿದ್ದ ಪಿ.ಮಣಿವಣ್ಣನ್ ಸ್ವತ: ಭೇಟಿ ನೀಡಿ, ಸಮೀಕ್ಷೆ ಕೈಗೊಂಡಿದ್ದರು. ಕೆರೆಯ ಪುನರುಜ್ಜೀವನಕ್ಕೆ ಕ್ರಿಯಾಯೋಜನೆ ಸಲ್ಲಿಸುವಂತೆ ಸ್ಥಳೀಯ ವಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಈ ನಿರ್ಣಯ ಕೈಗೊಂಡ ಒಂದೇ ವಾರದಲ್ಲಿ ಮೈಸೂರಿಗೆ ಅವರ ವರ್ಗಾವಣೆಯಾಯಿತು. ಇದು ಬಹುಶ: ಕೆರೆಯ ದುರ್ದೈವ.
ಈ ಕೆರೆಯನ್ನು ಭೂ ಮತ್ತು ವಿಜ್ಞಾನ ಇಲಾಖೆಯವರು (ಸದ್ಯ ೧೨) ಇಟ್ಟಂಗಿ ಭಟ್ಟಿಯವರಿಗೆ ಕರಾರಿನ ಮೇರೆಗೆ ಉಪಯೋಗಿಸಲು ನೀಡಿದ್ದರು. ಆದರೆ ಇಲ್ಲಿನ ಇಟ್ಟಂಗಿ ಭಟ್ಟಿಯವರು ಕರಾರು ಅವಧಿ ಮುಗಿದಿದ್ದರೂ ಕೆರೆಯ ಸುತ್ತಮುತ್ತಲೂ ಇಟ್ಟಂಗಿ ತಯಾರಿಸುವಲ್ಲಿ ಮಗ್ನರಾಗಿದ್ದಾರೆ.
ತೋಳನಕೇರಿಗೆ ಸೇರಿಸಲಾಗಿರುವ ಸುತ್ತಮುತ್ತಲಿನ ಬಡಾವಣೆಗಳ ಗಟಾರುಗಳನ್ನು ಬೇರೆಡೆ ತಿರುಗಿಸಿ ಕೆರೆ ಕಾಪಾಡುವಂತೆ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆಯ ಗಮನ ಸೆಳೆಯುವ ಪ್ರಯತ್ನ ಮತ್ತೊಮ್ಮೆ ಕೂಡ ಮಾಡಿದ್ದಾರೆ. ಪಾಲಿಕೆ ಮಾತ್ರ ಕೆರೆಯ 'ಪಾಲಕ'ನಾಗಲು ಸಿದ್ಧವಿಲ್ಲ. ಈ ಚರಂಡಿ ನೀರನ್ನು ಬೇರೆ ಮಾರ್ಗವಾಗಿ ಕೆರೆ ದಾಟಿಸಿ ಸಾಗುಹಾಕಿದ್ದಾದರೆ ಮರಣ ಶೆಯ್ಯೆಯಲ್ಲಿರುವ ಕೆರೆ ತುಸು ಚೇತರಿಸಿಕೊಳ್ಳಬಹುದು. ಸ್ಥಳೀಯರು ಕೂಡ ತಮ್ಮ ಕೈಜೋಡಿಸಲು ಸಿದ್ಧರಿದ್ದಾರೆ. ಪಾಲಿಕೆ ಸಮುದಾಯದ ಸಹಭಾಗಿತ್ವದಲ್ಲಿ ಕೆರೆಯ ಪುನರುಜ್ಜೀವಕ್ಕೆ ಮುಂದಾಗಬೇಕಿದೆ. ಕೆರೆಗಳನ್ನು ಹಾಳುಗೆಡವಿ ಕೇರಿಗಳನ್ನು ಸುಲಭವಾಗಿ ನಿರ್ಮಿಸಬಹುದು. ಆದರೆ ಕೇರಿಗಳನ್ನು ಕೆರೆಗಳನ್ನಾಗಿ ಅಷ್ಟು ಸುಲಭವಾಗಿ ಪರಿವರ್ತಿಸಬಹುದೇ?
ಖ್ಯಾತ ಪರಿಸರವಾದಿ ಡಾ.ಶಿವರಾಮ ಕಾರಂತರು ಹೇಳುತ್ತಿದ್ದರು.."ನಾಗರಿಕತೆಗಳು ಬೆಳೆದಂತೆ ಅರಣ್ಯಗಳು ಹಿಮ್ಮೆಟ್ಟುತ್ತವೆ; ಮರಭೂಮಿಗಳು ಹಿಂಬಾಲಿಸುತ್ತವೆ" ಈ ಮಾತು ಇಂದಿಗೂ ಪ್ರಸ್ತುತ.
ಕೋಮಲ ರಾಜಶೇಖರ ಮೋಟಗಿ
ಪಿ.ಜಿ.ಡಿ.ಜೆ.ಎಂ. ೧ ಸೆಮ್ ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಮಹಾವಿದ್ಯಾಲಯ- ಹುಬ್ಬಳ್ಳಿ- ೨೯.
ಹುಬ್ಬಳ್ಳಿಯ ಉಣಕಲ್ ಕೆರೆ ಕಾಲನ ಗರ್ಭ ಸೇರುವತ್ತ.
ಪ್ರಕೃತಿದತ್ತ ಜೀವಿ ದ್ರವ್ಯ ನೀರು. ಜಗತ್ತಿನ ಎಲ್ಲ ಜೀವ ಕೋಟಿಗಳಿಗೆ ಇದು ಬದುಕಿಗೆ ಆಧಾರ. ನೀರನ್ನು ಸತತವಾಗಿ ಕುಡಿಯುವುದರಿಂದ ನೈಸರ್ಗಿಕವಾಗಿಯೇ ಹಲವಾರು ಕಾಯಿಲೆಗಳನ್ನು ತಡೆಗಟ್ಟಬಹುದು. ಭಾರತೀಯ ಯೋಗ ವಿಜ್ಞಾನ ನೀರಿನ ಅಮೂಲ್ಯತೆಯನ್ನು ಸಮರ್ಪಕವಾಗಿ ಸಾರಿದೆ. ಆದರೂ ನಾವು ನೀರಿನ ಮೂಲಗಳನ್ನು ನ್ಯಾಯೋಚಿತವಾಗಿ ಬಳಸುವ ಮಾರ್ಗಗಳನ್ನು ಶೋಧಿಸುತ್ತಿಲ್ಲ ಎಂಬುದು ಆರೋಪ. ನಮ್ಮ ಭೂಮಿಯನ್ನು ಆವರಿಸಿರುವ ಒಟ್ಟು ನೀರಿನಲ್ಲಿ ಬಳಕೆಗೆ ಯೋಗ್ಯವಾದ ನೀರು ಶೇ. ೩ ರಷ್ಟು ಮಾತ್ರ! ಇದು ಚಿಂತನೆಗೆ ಈಡುಮಾಡುವಂತಹುದು.
ನಮ್ಮ ಹೂಬಳ್ಳಿಯ ಹತ್ತಿರದ ಉಣಕಲ್ ಕೆರೆ ಇಡೀ ನಗರಕ್ಕೆ ಮೆರಗು. ನಿತ್ಯ ಅವಳಿ ನಗರಗಳ ಮಧ್ಯೆ ಸಂಚರಿಸುವವರಿಗೆ ಈ ಕೆರೆ ವಿಶೇಷ ಆಕರ್ಷಣೆ. ಪ್ರಯಾಣಿಸುವವರು ಅತ್ತ ತಿರುಗಿ ಒಮ್ಮೆ ಕಣ್ಣು ಹಾಯಿಸದಿದ್ದರೆ ಏನೋ ಕಳೆದುಕೊಂಡ ಭಾವ. ಧಾರವಾಡದಿಂದ ಬರುವಾಗ ಎಡಬದಿಗೆ, ಹುಬ್ಬಳ್ಳಿಯಿಂದ ಹೋಗುವಾಗ ಬಲಬದಿಗೆ ಕಿಟಕಿಯ ಸೀಟು ಅಪೇಕ್ಷಿಸುವುದು ನಿತ್ಯದ ಪ್ರಯಾಸ. ಕಾರಣ ೧೮ ಕಿ.ಮೀ. ತಾಸುಗಟ್ಟಲೇ ಪ್ರವಾಸ ಪ್ರಯಾಸವಾಗದಿರಲಿ ಎಂದು! ಹಾಗೆಯೇ ಇಳಿಯಬೇಕಾದ ಸ್ಟಾಪ್ ಲೆಕ್ಕಹಾಕುವ ಗುಂಗಿನಲ್ಲಿ ಕೆರೆಯತ್ತ ಕಣ್ಣು ಹಾಯಿಸುವುದನ್ನು ಮರೆತಿದ್ದರೆ ಸಂಜೆ ಮರಳುವಾಗಾದರೂ ಒಮ್ಮೆ ನೋಡಿಯೇ ಹೋಗಬೇಕು ಎಂಬ ಮನದ ಇಂಗಿತ ತಣಿಸುವುದು ಸುಲಭವಲ್ಲ.
೧೮೯೩ರಲ್ಲಿ ಈ ಕೆರಯನ್ನು ಕಟ್ಟಲಾಯಿತು. ಇದು ಭಾರತರತ್ನ, ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಕಲ್ಪನೆಯ ಕೂಸು. ಅವರ ಕೆರೆ ಅಭಿವೃದ್ಧಿ ಯೋಜನೆಯ ಫಲವಾಗಿ ಹೂಬಳ್ಳಿಯವರಿಗೆ ದೊರಕಿದ ಕೆರೆ ಉಣಕಲ್ ಕೆರೆ.
"ನೀರು ಕೊಡಲ್ಯಾಕೆ ನಾನ್ಯಾರೋ..ನೀನ್ಯಾರೋಹೋಗಯ್ಯಾ ಹರಿಯೋ ಹೊಳೆಗಾಗಿ//
ಹರಿಯೋ ನೀರ್ ಹಚ್ಚಗೆ..ಕೆರೆಯ
ನೀರ್ ಬೆಚ್ಚಗೆನೀ ಕೊಟ್ಟ ನೀರು ಸಮರುಚಿ"//
ಎಂದು ನಮ್ಮ ಜಾನಪದ ಕವಿಗಳು ಹಾಡಿದಂತೆ ೧೮೯೩ರ ನಂತರ ಈ ಕೆರೆಯ ನೀರನ್ನು ಇಡೀ ಹುಬ್ಬಳ್ಳಿ ಮಹಾನಗರಕ್ಕೆ ಕುಡಿಯುವ ನೀರಾಗಿ ಪೂರೈಕೆ ಮಾಡಲಾಗುತ್ತಿತ್ತು. ಆಗಿನಿಂದ ಮಹಾನಗರಕ್ಕೆ ಕುಡಿಯುವ ನೀರಿನ ಅಭಾವ ಇರಲಿಲ್ಲ. ಆದರೆ ಹೂಬಳ್ಳಿ ವಾಣಿಜ್ಯ ನಗರಿಯಾಗಿ ಭರ್ಜರಿ ಬೆಳೆಯಿತು. ಅಂದಿನಿಂದ ಸೂಕ್ಷ್ಮವಾಗಿ ಈ ಕೆರೆಗೆ ಸರ್ಜರಿ ಆರಂಭವಾಯಿತು. ಪರಿಣಾಮವಾಗಿ ೧೦೪ ವರ್ಷಗಳು ಸತತವಾಗಿ ಹುಬ್ಬಳ್ಳಿಗರ ದಾಹ ತೀರಿಸಿದ ಕೆರೆ ೧೯೯೭ ರಲ್ಲಿ ತನ್ನ ಅನುಪಮ ಸೇವೆಯಿಂದ ನಿವೃತ್ತಿ ಹೊಂದಿತು.
ಈ ಉಣಕಲ್ ಕೆರೆಯ ಒಟ್ಟು ವಿಸ್ತೀರ್ಣ ಒಟ್ಟು ೨೫೦ ಎಕರೆಗಳು. ಕೆರೆಯ ಪಾತಳಿ ೯೦ ಮೀಟರ್ ಉದ್ದವಾಗಿದೆ. ೧ ಕಿ.ಮೀ ಉದ್ದದ ಕಟ್ಟೆಯನ್ನು ಸಹ ತಡೆಗೋಡೆಯಾಗಿ ನಿರ್ಮಿಸಲಾಗಿದೆ. ೮೦ ಘನ ಚದುರ ಅಡಿಗಳ ಒಡಲು ಹೊಂದಿದೆ. ಗೋಕುಲ ರಸ್ತೆ ಮತ್ತು ರಾಯಾಪುರ ಮಾರ್ಗವಾಗಿ ಕಾಲುವೆಗಳ ಮೂಲಕ ಇಲ್ಲಿಗೆ ನೀರು ಹರಿದು ಬರುತ್ತದೆ. ಕ್ಯಾಚ್ ಮೆಂಟ್ ಪ್ರದೇಶ ವ್ಯಾಪ್ತಿ ಸುಮಾರು ೨೦ ಕಿ.ಮೀ. ಇದೆ ಎಂದರೆ ನಾಡು ಕಂಡ ಪ್ರತಿಭಾಶಾಲಿ ಇಂಜಿನೀಯರ್ ವಿಶ್ವೇಶ್ವರಯ್ಯನವರ ದೂರದೃಷ್ಟಿ ನಮಗೆ ಅರ್ಥವಾಗಬಹುದು.
ಆದರೆ ಕೆರೆಯ ಸ್ಥಿತಿ ಇಂದು ಶೋಚನೀಯ. ಕೆರೆ ತನ್ನ ನಾಲ್ಕೂ ಮೂಲೆಗಳಿಂದ ಈಗ ಮಲೀನಗೊಳ್ಳುತ್ತಿದೆ. ಕೆರೆಯ ಸುತ್ತ ಹಾಗೆಯೇ ವೀಕ್ಷಣೆ ಮಾಡಿದರೆ ನಮಗೆ ಮಾಲಿನ್ಯದ ನೈಜ ಚಿತ್ರಣ ಕಣ್ಣಿಗೆ ರಾಚುತ್ತದೆ. ಕೆರೆಯ ಸುತ್ತಲೂ ಬಿದ್ದ ಸಿಮೆಂಟ್ ತುಂಬಲು ಬಳಸುವ ಪಾಲಿಥಿನ್ ಚೀಲಗಳು, ರಾಶಿ ಪ್ರಮಾಣದಲ್ಲಿ ತೇಲುತ್ತಿರುವ ಭಕ್ತ ಮಹಾಶಯರ ಹರಕೆಯ ಪಳೆಯುಳಿಕೆಗಳು! ಪ್ಲಾಸ್ತಿಕ್ ತ್ಯಾಜ್ಯ ತೇಲಾಡುವುದನ್ನು ನಾವು ಕಾಣುತ್ತೇವೆ. ಕೆರೆಗೆ ಹೊಂದಿಕೊಂಡಂತೆ ಪಂಚತಾರಾ ಶ್ರೇಣಿಯ ಹೊಟೇಲ್ ಇದೆ. ಅದು ಹೊರ ಹಾಕುವ ಮಾಲಿನ್ಯ ಕೂಡ ಪಂಚತಾರಾಶ್ರೇಣಿಯದ್ದೇ! ಹಾಗೆಯೇ ಸುತ್ತಮುತ್ತಲೂ ಇರುವ ವಾಹನಗಳ ಶೋ ರೂಮ್, ಸರ್ವಿಸ್ ಸೆಂಟರ್ ಗಳಿಂದ ಗಟಾರುಗಳ ಮೂಲಕ ಹರಿದು ಬರುವ ಅಣ್ಣೆ, ಗ್ರೀಸ್ ನಂತಹ ತ್ಯಾಜ್ಯ ಕೆರೆಯ ಜೀವಿ ವೈವಿಧ್ಯಕ್ಕೆ ಮರಣ ಮೃದಂಗ ಬಾರಿಸುತ್ತಿದೆ. ಕೆಲವರು ತಮ್ಮ ರಿಕ್ಷಾ, ಜೀಪ್, ಟ್ರ್ಯಾಕ್ಟರ್, ಕಾರು, ಲಾರಿ ಮೊದಲಾದ ವಾಹನಗಳನ್ನು ನೇರವಾಗಿ ನೀರಿಗಳಿಸಿ ಸ್ನಾನ ಮಾಡಿಸುತ್ತಾರೆ! ಸುತ್ತಮುತ್ತಲಿನ ನಿವಾಸಿಗಳ ಕೊಡುಗೆಯೂ ಅನುಪಮವಾದದದ್ದೇ! ತಮ್ಮ ಮನೆಗಳ ಮುಂದಿನ ಗಟಾರುಗಳನ್ನು ಕೆರೆಯ ಕ್ಯಾಚ್ ಮೆಂಟ್ ವ್ಯಾಪ್ತಿಗೆ ಸೇರಿಸಿ ನಿತ್ಯವೂ ಕೈತೊಳೆದುಕೊಳ್ಳುತ್ತಿದ್ದಾರೆ.
ಕೆಟ್ಟ ಮೇಲೆ ಬುದ್ಧಿ ಬಂತು..ನಮ್ಮ ಪಾಲಿಕೆಗೆ!
ಇತ್ತೀಚೆಗೆ ಅವಳಿ ನಗರ ಪಾಲಿಕೆ ಉಣಕಲ್ ಕೆರೆಯ ಶುದ್ಧೀಕರಣ ಮತ್ತು ಸಮರ್ಪಕ ನಿರ್ವಹಣೆಗೆ ಹತ್ತು ಕೋಟಿ ರುಪಾಯಿಗಳ ಯೋಜನೆ ರೂಪಿಸಿದೆ. ಕೆರೆಗೆ ಸೇರುತ್ತಿರುವ ವಿಷಯುಕ್ತ ನೀರನ್ನು ತಡೆಯಲಾಗುವುದು ಎನ್ನುತ್ತಾರೆ ವಲಯದ ಉಪ ಆಯುಕ್ತ ಎಸ್.ಎನ್.ಗಣಾಚಾರಿ. ಪ್ರಕೃತಿದತ್ತವಾಗಿರುವ ನೀರಿನ ಮೂಲಗಳನ್ನು ಬರಿದು ಮಾಡಿ, ಬರವನ್ನು ಸೃಷ್ಠಿಸಿಕೊಂಡಿದ್ದೇವೆ. ಅಂದರೆ ಒಂದು ಲೀಟರ್ ನೀರಿನ ಹಿತ-ಮಿತ ಬಳಕೆ ಅಥವಾ ಉಳಿಕೆ ೨ ಲೀಟರ್ ನೀರಿನ ಉಳಿತಾಯಕ್ಕೆ ಸಮ ಎಂಬ ಸರಳ ಸೂತ್ರ ಅರ್ಥವಾಗಿಲ್ಲ. ನಾವೆಲ್ಲ ಜಲಯೋಧರಾಗಲು ಇದು ಸಕಾಲ. ಇಲ್ಲದೇ ಹೋದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು.
ಪ್ರಭಾಕರ ಎಸ್. ಚಂದ್ರಪ್ಪನವರ್
ಎಂ.ಎ.ಜೆ.ಎಂ. ೧ ಸೆಮ್
ಐ.ಎಂ.ಸಿ.ಆರ್. ಮಹಾವಿದ್ಯಾಲಯ, ಹುಬ್ಬಳ್ಳಿ- ೨೯
ಕಸ ಮತ್ತು ರಸದೊಂದಿಗೆ ಕೀರ್ತಿ ಪೇಪರ್ಸ ಸರಸ.
Saturday, February 21, 2009




ಹೀಗೆಯೇ ಎಲ್ಲ ಕೈಗಾರಿಕೆಗಳು ಪರಿಸರ ಸ್ನೇಹಿಯಾಗಿ ಚಿಂತಿಸಿದರೆ..ಎಷ್ಟು ಅನುಕೂಲವಲ್ಲವೇ?
ಪಿ.ಜಿ.ಡಿ.ಜೆ.ಎಂ. ಪ್ರಥಮ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯
ಜಡೆಯಲ್ಲಿ ಜಿನುಗುವ ಗಂಗೆ
ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಶಿವನ ಮುಡಿಯಿಂದ ಈ ಧರೆಗೆ ಬಂದ ಕಥೆ ತಮಗೆ ತಿಳಿದಿದೆ. ಆ ಗಂಗೆಯ ಅವತರಣದಂತೆ ಗಜೇಂದ್ರಗಡ ಸಮೀಪದ ಶ್ರೀ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಸದಾ ಜಿನುಗುವ ನೀರು ನನ್ನಲ್ಲಿ ವಿಶೇಷ ಜಿಜ್ಞಾಸೆ ಮೂಡಿಸಿದೆ.


ಎಂ.ಎ.ಜೆ.ಎಂ. ಪ್ರಥಮ ಸೆಮ್ ವಿದ್ಯಾರ್ಥಿ
ಐ.ಎಂ.ಸಿ.ಆರ್.ಪತ್ರಿಕೋದ್ಯಮ ಮಹಾವಿದ್ಯಾಲಯ ಹುಬ್ಬಳ್ಳಿ -೨೯
ಪೂರಕ ಇಂಧನವಾಗಿ ಮಾನವ ತ್ಯಾಜ್ಯ
"ಕಣ್ಣು ಕಪ್ಪೆ ಚಿಪ್ಪಿನಗಲದ ದೋಣಿ; ನೋಟ ಸಮುದ್ರದಂತಹ ಪ್ರಾಣಿ" ಒಲುಮೆಯ ಕವಿ ಕೆ.ಎಸ್.ನರಸಿಂಹಸ್ವಾಮಿಗಳ ಮಾತು ಡಾ. ಉಮೇಶ ನಾಗಲೋಟಿಮಠ ಅವರಿಗೆ ಅಕ್ಷರಶ: ಅನ್ವಯಿಸುತ್ತದೆ. ಕಾರಣ,
ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಮಾಡಿ, ಇಡಿ ಆಸ್ಪತ್ರೆಗೆ ಇಂಧನ ಮೂಲವಾಗಿ ಬಳಸಿದ ಹೆಗ್ಗಳಿಕೆ ಹುಬ್ಬಳ್ಳಿಯ ಸುಶ್ರುತ ಮಲ್ಟಿ ಸ್ಪೆಷಾಲಿಟಿ ಕೇರ್ ಸೆಂಟರ್ ದ್ದು. ಆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉಮೇಶ ನಾಗಲೋಟಿಮಠ. ಅವರು ಖ್ಯಾತ ರೋಗ ನಿದಾನ ಶಾಸ್ತ್ರಜ್ಞರಾಗಿದ್ದ ದಿ. ಡಾ.ಸ.ಜ.ನಾಗಲೋಟಿಮಠ ಅವರ ಪುತ್ರ.
ಸುಶ್ರುತ ಮಲ್ಟಿ ಸ್ಪೆಷಾಲಿಟಿ ಕೇರ್ ಸೆಂಟರ್ ನಲ್ಲಿ ಕಿವಿ, ಗಂಟಲು ಹಾಗು ಮೂಗು ಶಸ್ತ್ರ ಚಿಕಿತ್ಸಾ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ
ಶ್ರೀನಿವಾಸ: ತಮಗೆ ಮೊಟ್ಟ ಮೊದಲಿಗೆ ಜೈವಿಕ ಅನಿಲ ಉತ್ಪಾದನೆ ಹಾಗು ಬಳಕೆಯ ಕುರಿತು ಯೋಚನೆ ಮೂಡಿದ್ದು ಹೇಗೆ?ಡಾ.ಉಮೇಶ: ನಾನು ಮೊದಲಿಗೆ ಸುಧಾ ವಾರಪತ್ರಿಕೆಯಲ್ಲಿ ಜೈವಿಕ ಅನಿಲ ಉತ್ಪಾದನೆಯ ಕುರಿತಾದ ನುಡಿಚಿತ್ರ ಓದಿದ್ದೆ. ಅದರಿಂದ ಒಂದು ಯೋಚನೆ ಮನಸ್ಸಿನಲ್ಲಿ ಮೂಡಿತು. ಆನಂತರ ಜೈವಿಕ ಅನಿಲದ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿ ತಿಳಿದುಕೊಂಡೆ. ಇದೆ ಸಂದರ್ಭದಲ್ಲಿ ಶಿಗ್ಲಿಯ ಸ್ವಾಮೀಜಿಯೊಬ್ಬರು ೫೦ ವರ್ಷಗಳ ಹಿಂದೆಯೇ ಜೈವಿಕ ಅನಿಲ ಉತ್ಪಾದನೆ ಸಾಹಸ ಕೈಗೊಂಡಿದ್ದರು. ಇದರಿಂದ ಯೋಚನೆ ಬಲಗೊಂಡಿತು.

ಡಾ.ಉಮೇಶ: ನನಗೆ ಜೈವಿಕ ಅನಿಲ ಉತ್ಪಾದನೆಯ ಪ್ರಕ್ರಿಯೆಯ ೨ ತೊಟ್ಟಿಗಳನ್ನು ನಿರ್ಮಿಸಲು ೬೦ ಸಾವಿರ ರುಪಾಯಿ ಖರ್ಚಾಗಿದೆ. ಹಾಗೆಯೇ ಪೈಪ್ ಲೈನ್ ಅಳವಡಿಸಲು ೧೦ ರಿಂದ ೧೫ ಸಾವಿರ ರುಪಾಯಿ ವೆಚ್ಚ ತಗುಲಿದೆ. ಹೀಗೆ ೨ ವರ್ಷಗಳಿಂದ ನನಗೆ ಖರ್ಚಾದ ಹಣ ಅಂದಾಜು ೭೦ ಸಾವಿರ ರುಪಾಯಿಗಳು. ಈ ಪ್ರಯೋಗ ಅನುಷ್ಠಾನಗೊಳಿಸದೇ ಹೋಗಿದ್ದರೆ ತಿಂಗಳಿಗೆ ೧೫ ರಿಂದ ೨೦ ಸಾವಿರ ರುಪಾಯಿ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತಿತ್ತು. ಅಲ್ಲದೇ ದಿನಕ್ಕೆ ೧೨ ರಿಂದ ೧೪ ತಾಸು ಈ ಗ್ಯಾಸ್ ಬಳಸುತ್ತಿರುವುದರಿಂದ ಇಂಧನದ ಆರ್ಥಿಕ ಹೊರೆ ಆಸ್ಪತೆಯ ಮೇಲಿಲ್ಲ.
ಪಿ.ಜಿ.ಡಿ.ಜೆ.ಎಂ. ಪತ್ರಿಕೋದ್ಯಮ ವಿದ್ಯಾರ್ಥಿ
ಐ.ಎಂ.ಸಿ.ಆರ್. ಮಹಾವಿದ್ಯಾಲಯ ಹುಬ್ಬಳ್ಳಿ- ೨೯
ಮಾನವ ತ್ಯಾಜ್ಯ ಈ ಆಸ್ಪತ್ರೆಗೆ ಇಂಧನ ಮೂಲ.
ಬನ್ನಿ..ಹುಬ್ಬಳ್ಳಿಯ ಪ್ರತಿಷ್ಠಿತ ಸುಶ್ರುತ ಆಸ್ಪತ್ರೆಗೆ. ವೈದ್ಯ ವಿಜ್ಞಾನಿ ಖ್ಯಾತ ರೋಗ ನಿದಾನ ಶಾಸ್ತ್ರಜ್ಞರಾಗಿ ನಾಡಿನ ಗಮನ ಸೆಳೆದಿದ್ದ ಸೃಜನ, ಸಜ್ಜನ ಡಾ.ಸ.ಜ.ನಾಗಲೋಟಿಮಠ ಅವರ ಪುತ್ರ, ಕಿವಿ, ಗಂಟಲು ಹಾಗು ಮೂಗು ತಜ್ಞ ಡಾ.ಉಮೇಶ ನಾಗಲೋಟಿಮಠ ಅವರೇ ಈ ವಿಶೇಷ ಪ್ರಯೋಗ ಮಾಡಿ ಗಮನ ಸೆಳೆದವರು.
ಇಲ್ಲಿಯ ವರೆಗೆ ನಾವು ಜಾನುವಾರುಗಳ ಸಗಣಿಯಿಂದ ಗೋಬರ್ ಗ್ಯಾಸ್ ಉತ್ಪಾದಿಸಿ, ಬಳಸಿ ಅರಿತಿದ್ದೇವೆ. ಆದರೆ ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಮಾಡಿ ಇಡೀ ಅಸ್ಪತ್ರೆಗೆ ನಿರಂತರ ಗ್ಯಾಸ್ ಪೂರೈಕೆ ಸಾದ್ಯವಾಗಿಸಿದ ಕೀರ್ತಿ ಡಾ. ಉಮೇಶ ನಾಗಲೋಟಿಮಠ ಅವರದ್ದು.

ಸುಜಾತಾ ವಜ್ರಳ್ಳಿ
ಎಂ.ಎ.ಜೆ.ಎಂ. ವಿದ್ಯಾರ್ಥಿನಿ
ಐ.ಎಂ.ಸಿ.ಆರ್. ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ- ೨೯